ದಿಯಾ ಕಮ್ಯುನಿಕೇಷನ್ಸ್ ಸಂಸ್ಥೆ ವತಿಯಿಂದ ಶ್ರೀಮತಿ ಗೀತಾ ಶ್ರೀನಾಥ್, ಟಿ.ಎಸ್. ಸತ್ಯನಾರಾಯಣ್ ಅವರು ನಿರ್ಮಿಸಿರುವ ಪಿ. ಎಚ್. ವಿಶ್ವನಾಥ್ ಅವರ ಕಥೆ-ಚಿತ್ರಕಥೆ-ನಿರ್ದೇಶನದ "ಸುಳಿ" ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಆರ್. ಮಂಜುನಾಥ್ ಅವರ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನ ಹಾಗೂ ಎಸ್.ಪಿ. ವೆಂಕಟೇಶ್ ಅವರ ಸಂಗೀತವಿದೆ. ಚಿತ್ರದ ಸಂಭಾಷಣೆಯ ನಾ ದಾ ಹಾಗೂ ಚನ್ನಕೇಶವ ರವರು ಬರೆದಿದ್ದಾರೆ. ಹಾಡುಗಳನ್ನು ನಾ ದಾಮೋದರ ಶೆಟ್ಟಿ ಹಾಗೂ ಶ್ರೀಚಂದ್ರುರವರು ರಚಿಸಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಣಯರಾಜ ಡಾ. ಶ್ರೀನಾಥ್ರೊಂದಿಗೆ ಹೊಸ ಪ್ರತಿಭೆಗಳಾದ ಪ್ರಗತಿ, ನಿನಾಸಂ ಜಯರಾಂ, ಸುಶೀಲಮ್ಮ, ಅದ್ವಿತಿ, ಅಶ್ವಿತಿ, ಚನ್ನಕೇಶವ, ಲಿಂಗರಾಜು, ಶುಭಶ್ರೀ, ಸರಸ್ವತಿ, ಮಂಜು ಚಿನಕುರಳಿ, ಬಸವರಾಜು, ರಾಹುಲ್, ಗುರುಮೂರ್ತಿ ಸಾಗರ, ಸತೀಶ್ ಸಾಣೇಹಳ್ಳಿ ಹಾಗೂ ಇತರರಿದ್ದಾರೆ.